• Uncategorised

ಬೆ.ಡ್ ಮೇಲೆ ಕಾರ್ತಿಕ್ ಮಾಡಿದ್ದೇನು, ಬಿಗ್ ಬಾಸ್ ಬಳಿ ದೂರು ಹೇಳಿಕೊಂಡ ಸಂಗೀತ

ಬಿಗ್‌ಬಾಸ್‌ ಮನೆಯಲ್ಲಿ ಕಾರ್ತಿಕ್ ಸ್ನೇಹಿತ್‌ ಹೆಸರನ್ನು ತೆಗೆದುಕೊಳ್ಳದೇ  ಆತನ ಮೇಲೆ ಕೂಗಾಡಿದರೆ, ಇತ್ತ ಸಂಗೀತಾ ಅದನ್ನ ಪರ್ಸನಲ್ ಆಗಿ ತಗೊಂಡು ಗಳಗಳನೆ ಕಣ್ಣೀರು ಹಾಕಿದ್ದಾರೆ. ಕಾರ್ತಿಕ್  ಅನ್ನ ಖಾಲಿನಾ ಅಂತ ಸಿರಿಗೆ ಕೇಳಿದಾಗ ಇಷ್ಟೇ ಇರೋದು ಈಗ ಯಾರ್ಯಾರು ಇದ್ದಾರೋ ಇನ್ನೂ ಇಷ್ಟರಲ್ಲೇ ತಿನ್ನಬೇಕು ಎಂದರು.

ಆಗ ಕಾರ್ತಿಕ್ ಸ್ನೇಹಿತ್ ಹೆಚ್ಚು ಬಡಿಸಿಕೊಂಡಿದ್ದನ್ನ ಕಂಡು ಏನಿದು ಎಂದು ಕೇಳಿದರು. ಅದಕ್ಕೆ ವಿನಯ್ ನಾನು ಹಾಲು ಕುಡಿದೆ. ಎಲ್ಲರೂ ತಿನ್ನಲಿ ಅಂತ ಹೇಳಿದರು. ಅದಕ್ಕೆ ಕಾರ್ತಿಕ್‌ ತಲೆಯಲ್ಲಿ ಇರಬೇಕು. ಏನಾದರೂ ಮಾಡಲಿ.. ಎಷ್ಟಾದರೂ ಟಾಸ್ಕ್ ಇರಲಿ.. ಎಲ್ಲರೂ ಊಟ ಮಾಡಬೇಕು ಅನ್ನೋದು ತಲೆಯಲ್ಲಿ ಇರಬೇಕು.

ಅದಕ್ಕೆ ವಿನಯ್ ಅರ್ಧ ಅರ್ಧ ತಿನ್ನೋಣ ಬಾ ಎಂದು ಕಾರ್ತಿಕ್‌ಗೆ ಹೇಳಿದಾಗ, ಸಿರಿಯು ಸಹ ಶೇರ್ ಮಾಡೋಣ ಬನ್ನಿ ಕಾರ್ತಿಕ್ ಎಂದು ಕರೆದರು. ಆಗ ಕಾರ್ತಿಕ್ – ಎಲ್ಲಿ ಸಾಲುತ್ತೆ? ಯಾರಾದರೂ ಒಬ್ಬರು ಹೊಟ್ಟೆ ತುಂಬಿಸಿಕೊಳ್ಳಿ, ನಾನು ಅಡುಗೆ ಮಾಡುವಾಗೆಲ್ಲಾ, ಎಲ್ಲರಿಗೂ ಸಮಾನವಾಗಿ ಸಿಗಲಿ ಅಂತ ನನಗೆ ಕಮ್ಮಿ ಮಾಡಿಕೊಂಡು ಬಡಿಸುತ್ತೀನಲ್ವಾ.ಇದು ನನಗೆ ಆಗಬೇಕು ಎಂದರು. ಅದನ್ನು ಅಪಾರ್ಥ ಮಾಡಿಕೊಂಡ ಸಂಗೀತಾ,ಅವರಿಗೆ ಯಾರ ಹತ್ತಿರ ಪ್ರಾಬ್ಲಂ ಆಗಿದೆ. ಅದನ್ನ ಡೈರೆಕ್ಟ್ ಆಗಿ ಹೇಳಬಹುದು ಅಲ್ವಾ ಎಂದಿದಕ್ಕೆ  ಆ ವೇಳೆ ಸಿರಿ  ಗೊತ್ತಿಲ್ಲ ಎಂದಾಗ ಸಂಗೀತಾ  ಹೀಗೆ ಹೇಳಿದರೆ ತಿನ್ನುವವರಿಗೆ ಬೇಜಾರು ಆಗಲ್ವಾ ಎಂದರು.

ಆ ಸಮಯದಲ್ಲಿ ಸಂಗೀತಾ ನನಗೆ ಹೊಟ್ಟೆ ಹಸಿದಿತ್ತು. ನಾನಿನ್ನೂ ಊಟ ಬಾಯಿಗೆ ಹಾಕಿರಲಿಲ್ಲ. ಯಾರಾದರೂ ಅನ್ನದ ಬಗ್ಗೆ ಹಾಗೆ ಮಾತನಾಡುತ್ತಾರಾ? ನನಗೇನೂ ಬೇಡ. ನನಗೆ ಇಲ್ಲಿ ಬಂದಿದ್ದೇ ಸಾಕಾಗಿದೆ. ಊಟಕ್ಕೋಸ್ಕರ ಇಷ್ಟು ಮಾತಾಡ್ತೀವಿ ಅಂದ್ರೆ ನಾವು ದುಡಿಯೋದೇ ತಿನ್ನೋಕೆ. ತಿನ್ನಲು ಈಗ ಮನಸ್ಸಿಲ್ಲ. ತಟ್ಟೆಗೆ ಹಾಕೊಂಡಿರುವಾಗ ಜಾಸ್ತಿ ಹಾಕೊಂಡಿದ್ದೀರಾ ಅಂದ್ರೆ ಬೇಜಾರಾಗಲ್ವಾ? ಇಲ್ಲಿ ಎಷ್ಟು ದಿನ ಇರ್ತೀನೋ.. ಅಷ್ಟು ದಿನ ಬರೀ ಹಣ್ಣು ತಿಂದು ಇರುತ್ತೇನೆ. ತಿನ್ನುವಾಗ ಅವರು ಯಾಕೆ ಹೇಳಬೇಕು?ಎಂದು ಗಳಗಳನೆ ಅತ್ತುಬಿಟ್ಟರು ಸಂಗೀತಾ  .

ಇನ್ನು ಗೋಳಾಟ ಕಂಡ ಕಾರ್ತಿಕ್‌, ನಾನು ಅವಳಿಗೆ ಹೇಳಿಲ್ಲ. ಅವರು ಮನಸ್ಸಿಗೆ ತಗೊಂಡರೆ ನಾನೇನೂ ಮಾಡೋಕೆ ಆಗಲ್ಲ. ಎಲ್ಲಾ ನನಗೇ ಹೇಳಿದರು, ನನಗೇ ಮಾಡಿದರು ಅಂದುಕೊಂಡರೆ ನಾನೇನು ಮಾಡಲಿ? ನಾನು ಸ್ನೇಹಿತ್‌ಗೆ ಹೇಳ್ತಿರೋದು ಎಂದು ಕಾರ್ತಿಕ್ ಸ್ಪಷ್ಟಪಡಿಸಿದ ಬಳಿಕ ಸಂಗೀತಾ ಅನ್ನ-ಸಾರು ಊಟ ಮಾಡಿದರು. ವಿನಯ್‌ಗೂ ಸಂಗೀತಾ ತಿನ್ನಿಸಿದರು. ಆದರೆ ಮೊದಲಿನ ತರ ಇರೋಕಾಗಲ್ಲ ಎಂದು ಅವರು ನುಡಿದಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಸಂಗೀತಾ ಕಣ್ಣೀರು ಹಾಕಿದ್ದಾರೆ .

You may also like...