ವತೂ೯ರ್ ಗೆ ಒಲಿದ ಮತ್ತೊಂದು ಅದೃಷ್ಟ, ಅವರ ನೋವು ನೋಡಿ ಮದುವೆಯಾಗಲು ರೆಡಿಯಾದ ಖ್ಯಾತ ಸ್ಯಾಂಡಲ್ ವುಡ್ ನಟಿ
ಹಳ್ಳಿ ಕಾರ್ ತಳಿಯ ಹಸುಗಳ ಸಂರಕ್ಷಣೆಯನ್ನು ತೊಡಗಿಸಿಕೊಂಡು ಹಳ್ಳಿ ಕಾರ್ ಎಂದೇ ಗುರುತಿಸಿಕೊಂಡಿರುವ ಕನ್ನಡ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್, ಕಳೆದ ಒಂದು ತಿಂಗಳ ಹಿಂದೆ ಹುಲಿ ಉಗುರಿನ ಲಾಕೆಟ್ ಪ್ರಕರಣದಲ್ಲಿ ಜೈಲು ಸೇರಿ ಮತ್ತೆ ಬಿಗ್ಬಾಸ್ ಮನೆ ಪ್ರವೇಶಿಸಿದ ಸಂಗತಿ ಇಡೀ ರಾಜ್ಯಕ್ಕೆ ತಿಳಿದಿದೆ.
ಹುಲಿ ಉಗುರು ಪ್ರಕರಣದ ನಡುವೆಯೇ ವರ್ತೂರ್ ಸಂತೋಷ್ ಅವರ ವೈವಾಹಿಕ ಜೀವನವು ಸಹ ಮುನ್ನೆಲೆಗೆ ಬಂದಿತು. ಸಂತೋಷ್ಗೆ ಮದುವೆಯಾಗಿದೆ, ಅದನ್ನು ಮುಚ್ಚಿಡುತ್ತಿದ್ದಾನೆ, ಆತನೊಬ್ಬ ಪತ್ನಿ ಪೀಡಕ, ಪತ್ನಿಗೆ ಮೋಸ ಮಾಡಿದ್ದಾನೆ ಮತ್ತು ಆತ ಮಾದಕ ವ್ಯಸನಿಯಾಗಿದ್ದ ಅಂತೆಲ್ಲಾ ಆರೋಪಗಳು ಕೇಳಿಬಂದವು. ಅಲ್ಲದೆ, ಎಂಗೇಜ್ಮೆಂಟ್ ಮತ್ತು ಮದುವೆ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವುದ್ದವು.
ಇದೀಗ ಬಿಗ್ ಬಾಸ್ ಮನೆಯಲ್ಲಿ ವರ್ತೂರ್ ಸಂತೋಷ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.ನೀನು ಇಂಥವರಿಗೆ ತಾಳಿ ಕಟ್ಟು ಅಂದರೆ, ಅಥವರಿಗೆ ನಾನು ತಾಳಿ ಕಟ್ಟುತ್ತೇನೆ ಎಂದು ನಾನು ನನ್ನ ದೊಡ್ಡಪ್ಪನಿಗೆ ಹೇಳಿದ್ದೆ. ನಾನು ಮಾತು ಕೊಟ್ಟಂತೆ ಒಪ್ಪಿಕೊಂಡೆ ಮತ್ತು ನಡೆದುಕೊಂಡೆ. ಆದರೆ, ಮನೆಗೆ ಬಂದವಳು ನನ್ನ ತಾಯಿಯನ್ನು ನಿರ್ಲಕ್ಷಿಸಲು ಶುರು ಮಾಡಿದಳು. ನಾನು ಸಂಪಾದನೆ ಮಾಡಿದ ಜನರನ್ನು ಬಿಟ್ಟು ಇವರ ಹಿಂದೆ ಹೋಗಬೇಕೆಂದರೆ ಅದು ಸಾಧ್ಯಾನೇ ಇಲ್ಲ.
ಮನೆ ಬಿಟ್ಟು ಹೋದವಳನ್ನು ಕರೆದುಕೊಂಡು ಬರಲು ನಾನು ಆಕೆಯ ಮನೆಗೆ ಹೋದೆ ನನ್ನ ಮಾತಿನಂತೆ ನನ್ನ ಜತೆ ಬಂದರೆ, ಇಂದಿಗೂ ನೀನು ರಾಣಿಯೇ. ನಿನ್ನನ್ನು ರಾಣಿಯಂತೆ ನೋಡಿಕೊಳ್ಳುತ್ತೇನೆ ಬಾ ಎಂದು ಕರೆದೆ. ಆದರೆ, ಅವರು ನನ್ನನ್ನು ಗೇಟ್ನಿಂದ ಆಚೆ ಹೋಗು ಎಂದರು. ಅಂದು ನಾನು ಮಾತು ಕೊಟ್ಟು ಬಂದಿದ್ದೆ. ಅದರಂತೆ ನಾನಿಂದು ನನ್ನ ಮಾತಿನ ಮೇಲೆ ನಿಂತಿದ್ದೇನೆ ಎಂದು ವರ್ತೂರ್ ಸಂತೋಷ್ ಹೇಳಿದ್ದಾರೆ.