• Uncategorised

ವರ್ತೂರ್ ಬಗ್ಗೆ ಕೇಳುಬೇಡಿ; ಮೀಡಿಯಾದವರ ಪ್ರಶ್ನೆಗೆ ನಾಚಿ ನೀರಾದ ತನಿಷಾ

ಬಿಗ್ ಬಾಸ್ ಸೀಸನ್ 10ಕ್ಕೆ ಹೋಗಿ ಬಂದ ನಂತರ ಹೆಚ್ಚು ಫೇಮಸ್ ಆದವರಲ್ಲಿ ಒಬ್ಬರು ಕನ್ನಡ ಕಿರುತೆರೆ ನಟಿ ತನಿಷಾ ಕುಪ್ಪಂಡ. ಯಾವಾಗ್ಲೂ ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್‌ ಫೋಟೋಗಳನ್ನು ಶೇರ್ ಮಾಡ್ತಿರ್ತಾರೆ. ಇತ್ತೀಚಿಗೆ ರೇಷ್ಮೆ ಸೀರೆಯುಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದ್ದಾರೆ.

ತನಿಷಾ ಕುಪ್ಪಂಡ ಸೀರಿಯಲ್‌ಗಳಲ್ಲಿ ನಟಿಸಿ ಫೇಮಸ್ ಆಗಿದ್ದರು. ಬಿಗ್ ಬಾಸ್ ಗೂ ಮುಂಚೆ ಹೆಚ್ಚಿನ ಜನಕ್ಕೆ ಪರಿಚಿತರಾಗಿಲ್ಲದ ತನಿಷಾ, ಬಿಗ್ ಬಾಸ್ ಮೂಲಕ ರಾಜ್ಯದ ಜನರಿಗೆ ಹೆಚ್ಚು ಪರಿಚಿತರಾದರು.ತನಿಷಾ ಅವರಿಗಾಗಿ ಬೆಂಕಿ ಬಂತು ಬೆಂಕಿ ಎನ್ನುವ ಹಾಡನ್ನು ಸಹ ಬಿಡುಗಡೆ ಮಾಡಲಾಗಿತ್ತು. ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿದ್ದರು ತನಿಷಾ.

ಇತ್ತೀಚಿಗೆ ತನಿಷಾ ತಮ್ಮದೇ ಆದ ಜ್ಯುವೆಲ್ಲರಿ ಶಾಪ್‌ನ್ನು ಸಹ ಓಪನ್ ಮಾಡಿದ್ದಾರೆ. ಅದಕ್ಕೆ ಬಿಗ್‌ಬಾಸ್‌ನ ಎಲ್ಲಾ ಸ್ಪರ್ಧಿಗಳನ್ನು ಸಹ ಆಹ್ವಾನಿಸಿದ್ದಾರೆ. ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ತನಿಷಾ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ತನಿಷಾ ಜನರ ಜೊತೆ ಮತ್ತಷ್ಟು ಕನೆಕ್ಟ್ ಆಗಲು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

ಇನ್ನು ಅವರೆಲ್ಲೇ ಹೋಗಲಿ ಅವರ ಬಳಿ ವರ್ತೂರ್ ಸಂತೋಷ್ ಬಗ್ಗೆ ಕೇಳುವುದನ್ನು ಮಾತ್ರ ಜನ ನಿಲ್ಲಿಸುವುದಿಲ್ಲ. ಹಾಗಾಗಿ ಕೆಲ ದಿನಗಳ ಹಿಂದಷ್ಟೇ ನೆಡೆದ ಸಂದರ್ಶನ ಒಂದರಲ್ಲಿ ತನಿಷ ಯಾಕೆ ನನ್ನ ಬಳಿ ಪದೇ ಪದೇ ಅವರ ಬಗ್ಗೆ ಕೇಳ್ತೀರಿ? ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ ಎಂದು ನಸು ನಗುತ್ತಾ ಹೇಳಿಕೊಂಡಿದ್ದಾರೆ.

You may also like...