• Uncategorised

ದರ್ಶನ್ ಅಭಿಮಾನಿಗಳಿಗೆ ಬಿಸಿ ಮಟ್ಟಿಸಿದ ಅಶ್ವಿನಿ ಮೇಡಂ;

ಎಲ್ಲಾ ಸಿನಿರಂಗಗಳಲ್ಲೂ ಸ್ಟಾರ್ ವಾರ್/ ಫ್ಯಾನ್ಸ್ ವಾರ್ ಕಾಮನ್. ಆದರೆ ಅದು ಅತಿರೇಕಕ್ಕೆ ಹೋದಾಗ ಅಸಹ್ಯ ಅನಿಸುತ್ತದೆ. ಇವರಿಗೆ ಮಾನವೀಯತೇನೇ ಇಲ್ಲವೇ ಎಂದು ಅನಿಸುವಂತೆ ಮಾಡುತ್ತದೆ. ಈಗ ಅಂತಹುದೇ ಫ್ಯಾನ್ಸ್ ವಾರ್ ಗೆ ಸ್ಯಾಂಡಲ್ ವುಡ್ ಸಾಕ್ಷಿಯಾಗಿದೆ. ಇದರ ವಿರುದ್ಧ ಅಪ್ಪು ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ. ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಸದ್ಯ ಕನ್ನಡ ಸಿನಿಮಾರಂಗ ಸಂಕಷ್ಟದ ಸ್ಥಿತಿಯಲ್ಲಿದೆ. ವಾರಕ್ಕೆ ಐದಾರು ಸಿನಿಮಾಗಳು ತೆರೆಗೆ ಬಂದರೂ ಸಹ ಯಾವ ಕನ್ನಡ ಸಿನಿಮಾನೂ ಜನರ ಮನಸ್ಸು ಗೆಲ್ಲುತ್ತಿಲ್ಲ. ಚಿತ್ರಮಂದಿರದಲ್ಲಿ ಸಿನಿಮಾ ನಿಲ್ಲುತ್ತಿಲ್ಲ. ಈ ವರ್ಷ 77 ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಅದರಲ್ಲಿ ಒಂದೇ ಒಂದು ಕನ್ನಡ ಸಿನಿಮಾ 15 ಕೋಟಿ ಗ್ರಾಸ್ ಕಲೆಕ್ಷನ್ ಗಳಿಸಿಲ್ಲ.

ಇದರ ನಡುವೆ ಮಂಜುಮೆಲ್ ಬಾಯ್ಸ್ ನಂತಹ ಮಲಯಾಳಂ ಸಿನಿಮಾ ಕನ್ನಡ ನೆಲದಲ್ಲಿ 15 ಕೋಟಿಗಿಂತ ಹೆಚ್ಚು ಲೂಟಿ ಮಾಡಿ ಹೋಗಿದೆ. ಹೀಗಿರುವಾಗ ಫ್ಯಾನ್ಸ್ ವಾರ್ ಬೇಕಾ? ಇದರಿಂದ ಯಾರಿಗೆ ಲಾಭ? ಆರ್ಸಿಬಿ ಪಂದ್ಯ ಆರಂಭವಾಗುವ ಮುನ್ನ ಅಶ್ವಿನಿ ಪುನೀತ್ ರಾಜಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದ್ದರು.

ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಪೆ ಪ್ರದರ್ಶನಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಕಾರಣ.ಅವರನ್ನು ಆರ್ ಸಿಬಿ ಈವೆಂಟ್ ಗೆ ಕರೆಸಬಾರದಿತ್ತು ಎನ್ನುವ ಕೀಳುಮಟ್ಟದ ಪೋಸ್ಟ್ ವೊಂದು ಇದೀಗ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಫ್ಯಾನ್ಸ್ ವಾರ್ ಗೆ ದಾರಿಮಾಡಿಕೊಟ್ಟಿದ್ದು, ನಟ ದರ್ಶನ್ ಅಭಿಮಾನಿಗಳ ವಿರುದ್ಧ ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ.

You may also like...