• Uncategorised

ಧ್ರುವ ಸರ್ಜಾಗೆ ದೊಡ್ಡ ಆ.ಘಾತ, ಆಸ್ಪತ್ರೆಗೆ ಓಡೋಡಿ ಬಂದ ಮೇಘನಾ ರಾಜ್

ಕನ್ನಡ ಚಿತ್ರರಂಗದ ಖ್ಯಾತ ನಟ ಆಕ್ಷನ್ ಪ್ರಿನ್ಸ್ ಖ್ಯಾತಿಯ ಧ್ರುವ ಸರ್ಜಾ ಮತ್ತು ಮಾರ್ಟಿನ್ ಚಿತ್ರ ತಂಡವಿದ್ದ ವಿಮಾನವು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಆಘಾತಕಾರಿ ಘಟನೆ ನಿನ್ನೆ ಸಂಭವಿಸಿದೆ.ಧ್ರುವ ಸರ್ಜಾ ನಟನೆಯ ಮಾರ್ಟಿನ್ ಚಿತ್ರ ತಂಡ ಅಂತಿಮ ಹಂತದ ಚಿತ್ರೀಕರಣದ ಯೋಜನೆಯಲ್ಲಿತ್ತು.

ಹೀಗಾಗಿ ಚಿತ್ರ ತಂಡ ಸೋಮವಾರ ಸಂಜೆ ಹಾಡೊಂದರ ಚಿತ್ರೀಕರಣಕ್ಕಾಗಿ ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಇಂಡಿಗೋ ವಿಮಾನದಲ್ಲಿ ಪಯಣಿಸುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ವಿಮಾನ ಹಾರಾಟದಲ್ಲಿ ವ್ಯತ್ಯಯ ಕಂಡು ಬಂದಿದ್ದು, ಹವಾಮಾನ ವೈಪರೀತ್ಯದಿಂದಾಗಿ ರಾಡಾರ್ ಕಂಟ್ರೋಲ್ ತಪ್ಪಿದ್ದ ವಿಮಾನ ಕಾರ್ಗಿಲ್ ಪ್ರದೇಶಕ್ಕೂ ಹೋಗಿ ಸಡನ್ ಆಗಿ ಸಾವಿರಾರು ಅಡಿ ಕೆಳಗಿಳಿದು ಪೈಲೆಟ್ ಕಂಟ್ರೋಲ್ ತಪ್ಪಿದೆ ಎಂದು ತಿಳಿದು ಬಂದಿದೆ.

ನಂತರ ವಿಮಾನವನ್ನು ಪುನಃ ತನ್ನ ಕಂಟ್ರೋಲ್‌ಗೆ ಪಡೆದುಕೊಂಡ ಪೈಲಟ್‌ ಕ್ರಾಶ್ ಆಗಬೇಕಾಗಿದ್ದ ವಿಮಾನವನ್ನು ಜಾಗರೂಕವಾಗಿ ಯಾವುದೇ ಅನಾಹುತ ಆಗದಂತೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದಾರೆ. ವಿಮಾನದಲ್ಲಿ ಏಕಾಏಕಿ ಉಂಟಾದ ಅನಾನುಕೂಲತೆಯಿಂದ ಚಿತ್ರತಂಡ ಸೇರಿದಂತೆ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲಾ ಭಯದಿಂದ ಗಾಬರಿಯಾಗಿದ್ದಾರೆ. ಸೀಟ್‌ಗಳು ನಡುಗಿದ ಅನುಭವವಾಗಿದೆ. ಕುಳಿತಿದ್ದ ಸ್ಥಳದಲ್ಲಿಯೇ ಪ್ರಯಾಣಕರು ಜೀವ ಉಳಿದುಕೊಂಡರೇ ಸಾಕಪ್ಪ ಎಂದು ದೇವರನ್ನು ನೆನೆದಿದ್ದಾರೆ.

ಪ್ರಯಾಣಿಕರು ವಿಮಾನದ ಒಳಗಿಂದ ವಿಡಿಯೋ ರೆಕಾರ್ಡ್ ಮಾಡಿದ್ದು ವಿಮಾನ ಅಲ್ಲೋಲಕಲ್ಲೋಲವಾಗಿ ಹಾರಾಟ ಮಾಡುತ್ತಿರುವಾಗ ಪ್ರಯಾಣಿಕರು ಗಾಬರಿಗೊಂಡು ದೇವರ ಮಂತ್ರ ಹೇಳುತ್ತಿರುವುದು ಸೆರೆಯಾಗಿದೆ. ಕೆಲವೊಬ್ಬರು ತನ್ನ ಮನೆಯವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಇನ್ನು ವಿಷಯ ತಿಳಿದ ಮೇಘನಾ ರಾಜ್ ಧ್ರುವ ಸರ್ಜಾ ಅವರನ್ನು ನೆನೆದು ಕಣ್ಣೀರು ಇಟ್ಟಿದ್ದಾರೆ.

You may also like...