• Uncategorised

ಪ್ರದೀಪ್ ಈಶ್ವರ್ ಮೇಲೆ ರೊ.ಚ್ಚಿಗೆದ್ದ ಮಂಗಳಮುಖಿ; ಎದ್ದು ಬಿದ್ದು ನಕ್ಕ ರಂಗಣ್ಣ

ಪ್ರದೀಪ್ ಈಶ್ವರ್ ಮಂತ್ರಿಯಾದಮೇಲೆ ಒಂದಿಷ್ಟು ಜನ ಮನ್ನಣೆ ಗಳಿಸುವ ಕಾರ್ಯಕ್ರಮ ಕೈಗೊಂಡಿದ್ದಾರೆ. ಆದರೂ ಕೂಡ ಹಲವರ ಅಭಿಪ್ರಾಯದ ಪ್ರಕಾರ ಅವರೊಬ್ಬ ವೇಸ್ಟ್ ಮಂತ್ರಿ ಎಂದು ಕೆಲವರು ಹೇಳುತ್ತಾರೆ. ಹೌದು ಈ ಕುರಿತಾಗಿ ಮಹಿಳೆಯೊಬ್ಬರು ಬಾಯಿಗೆ ಬಂದಂತೆ ಬಯ್ದಿದ್ದಾರೆ.

ರಾತ್ರಿ ಸಿನಿಮಾ ನೋಡಿಕೊಂಡು ಬೆಳಗ್ಗೆ ಡೈಲಾಗ್ ಹೊಡಿತಿಯಾ, ಅವೆಲ್ಲಾ ಈಗ ನಡೆಯಲ್ಲಾ, ಜನ ಮತ್ತೆ ನಂಬಲ್ಲಾ. ನಿನಗೆ ತಾಕತ್ ಇದ್ರೆ ಡಾ. ಕೆ ಸುಧಾಕರ್ ಮಂತ್ರಿ ಆಗುವುದನ್ನು ತಡೆಯಲಿ ನೋಡೋಣಾ? ಅಂತ ಪರೋಕ್ಷವಾಗಿ ಪ್ರದೀಪ್ ಈಶ್ವರ್‌ಗೆ ಮಹಿಳೆ ಸವಾಲು ಹಾಕಿದ್ದಾರೆ.

ಇನ್ನು ಇತ್ತೀಚಿಗೆ ಚಿಕ್ಕಬಳ್ಳಾಪುರಕ್ಕೆ ಒಬ್ಬ ಹುಚ್ಚ ವೆಂಕಟ್ ಬಂದಿದ್ದಾನೆ ಅಂತ ಕೋಲಾರ ಸಂಸದ ಮುನಿಸ್ವಾಮಿ ವ್ಯಂಗ್ಯವಾಡಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಅವರ ಹೆಸರು ಹೇಳದೇ ಗುಡುಗಿದ ಮುನಿಸ್ವಾಮಿ, ಕೇಂದ್ರ ಸಂಪುಟದ ಎಲ್ಲಾ ಮಂತ್ರಿಗಳು ಬಂದರೂ ಸುಧಾಕರ್ ನಾ ಗೆಲ್ಲಲು ಬಿಡಲ್ಲ ಎಂದನಲ್ಲಾ. ನಿನ್ಮದೇ ಸರಕಾರದಲ್ಲಿ ಎರಡು ಕೋಟಿ ಅನುದಾನ ತರಲು ಆಗಲಿಲ್ಲ ಅಂತ ಕಾಲೆಳೆದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದ ಪ್ರದೀಪ್‌, ಹಿಂದಿನ ಆಡಳಿತ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ. ಸುಧಾಕರ್ ಅವರ ವಿರುದ್ಧ ಗೆದ್ದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಊರಿನಲ್ಲಿಯೇ ಇದ್ದು ಶಾಲೆಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಪ್ರದೀಪ್ ಈಶ್ವರ್, 2018ರಲ್ಲಿ ಪರಿಶ್ರಮ ನೀಟ್ ಅಕಾಡೆಮಿಯನ್ನು ಸ್ಥಾಪಿಸಿದರು.

ಜೀವಶಾಸ್ತ್ರ ವಿಷಯವನ್ನು ಕಲಿಸುವ ಪ್ರದೀಪ್, ಇತರ ಉಪನ್ಯಾಸಕರೊಂದಿಗೆ ಸೇರಿ ಬೆಂಗಳೂರಿನಲ್ಲಿ ಈ ನೀಟ್ ಅಕಾಡೆಮಿಯನ್ನು ನಡೆಸುತ್ತಿದ್ದಾರೆ.

You may also like...