• Uncategorised

ಶಿವಣ್ಣನ ಪರಿಸ್ಥಿತಿ ಏನಾಯಿತು, ಒಮ್ಮೆಲೇ ಜ್ವರ ಬಂದಿದ್ದು ಯಾಕೆ ಗೊತ್ತಾ

ರಾಜಕುಮಾರ್ ಅವರ ಮೂವರು ಮಕ್ಕಳಲ್ಲಿ ಶಿವಣ್ಣ ಅವರು ಕನ್ನಡ ಚಿತ್ರರಂಗದಲ್ಲಿ ಹ್ಯಾಟ್ರಿಕ್ ಹೀರೊ ಎಂದೆ ಖ್ಯಾತಿ ಪಡೆದಿದ್ದಾರೆ. ಶಿವಣ್ಣ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ತಮ್ಮದೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕನ್ನಡ ಚಿತ್ರರಂಗ ಹಾಗೂ ರಾಜಕುಮಾರ್ ಫ್ಯಾಮಿಲಿಗೆ ಇತ್ತೀಚಿಗೆ ಅಪ್ಪು ಅವರನ್ನು ಕಳೆದುಕೊಂಡು ಒಂದು ಕೈ ಕಳೆದುಕೊಂಡಂತೆ ಆಗಿದೆ ಇದೀಗ ಶಿವಣ್ಣ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿರುವುದು ಎಲ್ಲರನ್ನೂ ಕೂಡ ಚಿಂತೆಗೀಡು ಮಾಡಿದೆ.

ಶಿವಣ್ಣ ಅವರು ಕೆಲವು ದಿನಗಳಿಂದ ವೇದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಜೊತೆಗೆ ಖಾಸಗಿ ವಾಹಿನಿಯೊಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಕಡೆ ಮೈಸೂರಿನಲ್ಲಿರುವ ಶಕ್ತಿಧಾಮದ ಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಪುನೀತ್ ಅವರು ಶಕ್ತಿಧಾಮವನ್ನು ನೋಡಿಕೊಳ್ಳುತ್ತಿದ್ದರು ಆದರೆ ಪುನೀತ್ ಅವರು ಇಲ್ಲದ ಕಾರಣ ಶಿವಣ್ಣ ಅವರು ಅದರ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಶಿವಣ್ಣ ಅವರು ಕೆಲಸದ ಕಾರಣದಿಂದ ಮೈಸೂರು, ಬೆಂಗಳೂರು ಶೂಟಿಂಗ್ ಸೆಟ್ ಹೀಗೆ ಹಲವು ಕಡೆ ಓಡಾಡುತ್ತಿದ್ದರು. ಈ ಕಾರಣಕ್ಕಾಗಿ ಅವರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಯ ಕಂಡುಬಂದಿತು. ಶಿವಣ್ಣ ಅವರಿಗೆ ಜ್ವರ, ಮೈಕೈನೋವು ಕಾಣಿಸಿಕೊಂಡಿತು. ಮೈಕೈ ನೋವು ಕಾಣಿಸಿಕೊಂಡಾಗ ನಿರ್ಲಕ್ಷ ಮಾಡುವ ಹಾಗಿಲ್ಲ ಆದ್ದರಿಂದ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಭೇಟಿ ನೀಡಿ ಹೃದಯದ ಪರೀಕ್ಷೆ ಮಾಡಲಾಯಿತು.

ವೈದ್ಯರು ಯಾವುದೆ ಸಮಸ್ಯೆ ಇಲ್ಲ ಎಂದು ಹೇಳಿದ ನಂತರ ಶಿವಣ್ಣ ಅವರು ಶಕ್ತಿಧಾಮಕ್ಕೆ ವಾಪಸ್ ಬಂದರು.
ಈಗ ಅವರ ಆರೋಗ್ಯದಲ್ಲಿ ಯಾವುದೆ ಸಮಸ್ಯೆ ಇಲ್ಲ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ, ಇದರಿಂದ ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನವಾಗಿದೆ. ಇನ್ನು ಇವರನ್ನು ನೋಡಲು ಆಸ್ಪತ್ರೆಗೆ ಆಗಮಿಸಿದ್ದರು ತಮ್ಮ ರಾಘವೇಂದ್ರ ರಾಜ್ ಕುಮಾರ್ ಅವರು.

ಸ್ವಲ್ಪ ಹುಷಾರಿಲ್ಲ ಎಂದರೂ ಭಯವಾಗುತ್ತದೆ ಇತ್ತೀಚಿಗೆ ಅಪ್ಪು ಅವರನ್ನು ಕೂಡ ಕಳೆದುಕೊಂಡಿದ್ದೇವೆ ಶಿವಣ್ಣ ಅವರಿಗೆ 2015 ರಲ್ಲಿ ಲಘು ಹೃದಯಾಘಾತ ಆಗಿದ್ದು ಸರ್ಜರಿ ಮಾಡಲಾಗಿದೆ ಈ ಕಾರಣಕ್ಕೆ ಆತಂಕ ಮೂಡುತ್ತದೆ ಎಂದಿದ್ದಾರೆ.

You may also like...