• Uncategorised

ವರ್ತೂರು ಸಂತು ಬಿಗ್ ಬಾಸ್ ಮನೆಯಿಂದ ಹೊರಬರಲು ಕಾರಣ ಏನು ಗೊ.ತ್ತಾ

ಬಿಗ್ ಬಾಸ್‌ ಮನೆಯಲ್ಲಿ ಹೈ ಡ್ರಾಮ ನಡೆಯುತ್ತಿದೆ. ಇದು ಕಿಚ್ಚ ಸುದೀಪ್‌ಗೂ ದೊಡ್ಡ ಶಾಕ್. ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಿಂದ ಹೊರಬರಬೇಕು ಅಂತ ಹಠ ಹಿಡಿದು ಕೂತಿದ್ದಾರೆ. ಅದ್ಯಾರೇ ಮನವೊಲಿಸುವ ಪ್ರಯತ್ನ ಮಾಡಿದರೂ ಸಮಾಧಾನ ಆಗುವಂತೆ ಕಾಣುತ್ತಲ್ಲೇ ಇಲ್ಲ.

ನಿನ್ನೆ ಸೂಪರ್‌ ಸಂಡೇ ವಿತ್ ಸುದೀಪ ಕಾರ್ಯಕ್ರಮದ ಎಲಿಮಿನೇಷನ್ ರೌಂಡ್ ಇತ್ತು. ಈ ವೇಳೆ ಕಿಚ್ಚ ಸುದೀಪ್ ವರ್ತೂರು ಸಂತೋಷ್‌ರನ್ನು ನೀವು ಸೇಫ್ ಎಂದು ಅನೌನ್ಸ್ ಮಾಡುತ್ತಿದ್ದಂತೆ ವರ್ತೂರು ಸಂತೋಷ್ ಭಾವುಕರಾಗಿದ್ದರು. ಕಿಚ್ಚ ಸುದೀಪ್‌ಗೆ, ಬಿಗ್‌ಬಾಸ್‌ ಮನೆಯ ಸದಸ್ಯರಿಗೆ, ಓಟ್ ಹಾಕಿದ 34 ಲಕ್ಷಕ್ಕಿಂತ ಅಧಿಕ ಜನರಿಗೆ ಬಿಗ್ ಶಾಕ್ ಕೊಟ್ಟಿದ್ದರು.

ನನಗೆ ಹೊರಗೆ ನಡೆದ ಘಟನೆಯನ್ನು ಮರೆತು ಆಡಬೇಕು ಎಂದು ಇಲ್ಲಿಗೆ ಬಂದೆ. ಆದರೆ ನನಗೆ ಅದರಿಂದ ಹೊರಗೆ ಬರಲು ಸಾಧ್ಯಾಗುತ್ತಿಲ್ಲ. ಹಾಗಾಗಿ ನಾನು ಶೋದಿಂದ ಹೊರಗೆ ಹೋಗಲು ಬಯಸುತ್ತೇನೆ ಎಂದು ಹೇಳಿದರು. ಸುದೀಪ್ ಕೂಡ ಮನವೊಲಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ.

ಇನ್ನು ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ರಕ್ಷಕ್ ಬುಲೆಟ್ ಎಲಿಮಿನೇಟ್ ಆಗಿ ಹೊರ ಬರುತ್ತಿದ್ದಂತೆ ಒಂದಾದ ಮೆಲ್ಲೊಂದು ಬುಲೆಟ್ ಫಯರ್ ಮಾಡುತ್ತಿದ್ದರು. ಎಲಿಮಿನೇಷನ್, ನಾಮಿನೇಷನ್ ಮತ್ತು ಗೇಮ್‌ ಬಗ್ಗೆ ಮಾತನಾಡುತ್ತಿರುವ ರಕ್ಷಕ್‌ ಈಗ ಸಿಹಿ ಸುದ್ದಿವೊಂದನ್ನು ಜನರ ಜೊತೆ ಹಂಚಿಕೊಂಡಿದ್ದರು. ವರ್ತೂರ್ ಸಂತೋಷ್ ನನ್ನ ಜೊತೆ ಚೆನ್ನಾಗಿದ್ದರು. ಅವರಿಗೆ ಒಳ್ಳೆಯದಾಗಲಿ.

ಬಿಗ್ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆ ಮುಂದಿನ ದಿನಗಳಲ್ಲಿ ಅವರ ನಿಶ್ಚಿತಾರ್ಥ ನಡೆಯಲಿದೆ. ಹೊರಗಡೆ ಅವರಿಗೆ ಅಂತ ಹುಡುಗಿ ಇದ್ದಾರೆ. ಸುಮ್ಮನೆ ಗಾಸಿಪ್ ಮಾಡುತ್ತಾರೆ ಜನರು. ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವುದು ಕಾಮಿಡಿ ಅಷ್ಟೆ. ಸಂತೋಷ್ ಮದುವೆಯಾಗುತ್ತಿರುವ ಹುಡುಗಿ ನೋಡುತ್ತಿದ್ದರೆ ದಯವಿಟ್ಟು ಕ್ಷಮಿಸಿ ಕಾಮಿಡಿಗೋಸ್ಕರ ನಾವು ರೇಗಿಸಿಕೊಂಡು ಮಾತನಾಡುತ್ತಿದೆವು. 

ಎಂದ ಮಾತು ಈಗ ಹೈ ಲೈಟ್ ಆಗ್ತಿದೆ. ಮದುವೆ ಆಗಳೆಂದೆ ವರ್ತೂರ್ ಸಂತೋಷ್ ಬಿಗ್ಬಾಸ್ ಮನೆಯಿಂದ ಹೊರಗೆ ಬರಲು ಬಯಸುತ್ತಿದ್ದಾರೆ ಎನ್ನಲಾಗುತ್ತಿದೆ.

https://youtu.be/UrXdppe67qg?si=HKqoJMSZKDf8dckq

You may also like...